“ಯಕ್ಷ ದ್ರೋಣ” ಶ್ರೀ ಆರ್ಗೋಡು ಮೋಹನದಾಸ್ ಶೆಣೈಯವರ ಚರಿತ್ರೆ

ಯಕ್ಷಗಾನ ರಂಗದ ಹೆಸರಾಂತ ಹಿರಿಯ ಭಾಗವತ ಶ್ರೀ ಕೆ. ಗೋವಿಂದರಾಯ ಶೆಣೈ ಮತ್ತು ಶ್ರೀಮತಿ ಮುಕ್ತಾಬಾಯಿ ದಂಪತಿಯ ಪುತ್ರರಾಗಿ, 10 ಅಕ್ಟೋಬರ್ 1950ರಂದು ಆರ್ಗೋಡು ಮೋಹನದಾಸ್ ಶೆಣೈ ಜನಿಸಿದರು. ಅವರ ಪತ್ನಿ ಶ್ರೀಮತಿ ಕಸ್ತೂರಿ ಅವರು. ದಂಪತಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು, ಹಾಗೂ ಎಂಟು ಮೊಮ್ಮಕ್ಕಳು ಇದ್ದು, ಇಡೀ ಕುಟುಂಬವೇ ಯಕ್ಷಗಾನವನ್ನು ಪ್ರೀತಿಸುತ್ತಾ ಪ್ರೋತ್ಸಾಹಿಸುತ್ತಿರುವ ಸಾಂಸ್ಕ್ರತಿಕ ಬಂಧನದ ಸಂಕೇತವಾಗಿದೆ.
ಶ್ರೀ ಮೋಹನದಾಸ್ ಶೆಣೈರವರು ಯಕ್ಷಗಾನದಲ್ಲಿ ತಮ್ಮ ಪಥವನ್ನು ಆರಂಭಿಸಲು ತಮ್ಮ ತಂದೆ, ಹಿರಿಯ ಭಾಗವತ ಕೆ. ಗೋವಿಂದರಾಯ ಶೆಣೈ ಅವರ ಮಾರ್ಗದರ್ಶನವನ್ನು ಪಡೆದರು. ಮಾತುಗಾರಿಕೆಯ ಕಲೆಯಲ್ಲಿ ಮಾರ್ಗದರ್ಶಕರಾಗಿದ್ದವರು ಅವರ ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ ಮತ್ತು ನರಸಿಂಹ ಶೆಣೈ. ಹಾಸ್ಯ ಹಾಗೂ ಕುಣಿತದಲ್ಲಿ ಹೆಸರಾಗಿದ್ದ ಕಮಲಶಿಲೆ ಮಹಾಬಲ ದೇವಾಡಿಗ ಅವರಿಂದ ಅವರು ನೃತ್ಯ ಶೈಲಿಯ ತಾತ್ತ್ವಿಕತೆಗಳನ್ನು ಅರಿತುಕೊಂಡರು.
ಪಿಯುಸಿ ವಿದ್ಯಾಭ್ಯಾಸದ ಬಳಿಕ ಸುಮಾರು 43 ವರ್ಷಗಳ ಕಾಲ ಯಕ್ಷಗಾನ ರಂಗಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ಹಿರಿಯಡ್ಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟ, ಕೋಟ ಅಮೃತೇಶ್ವರಿ ಮತ್ತು ಕಮಲಶಿಲೆ ಮೇಳಗಳೊಂದಿಗೆ ತಮ್ಮ ಕಲಾಜೀವನವನ್ನು ನಡೆಸಿದ್ದಾರೆ. ಅವರ ಈ ದುಡಿಮೆಯು ಯಕ್ಷಗಾನದ ಬೆಳವಣಿಗೆಯ ಅಡಿಪಾಯಗಳಲ್ಲಿ ಒಂದಾಗಿ ಉಳಿದಿದೆ.
ಯಕ್ಷಗಾನ ರಂಗ ಪ್ರವೇಶದ ಪ್ರೇರಣಾ ಕಿರಣ:
ಯಕ್ಷಗಾನ ರಂಗದತ್ತ ನನ್ನ ಹೆಜ್ಜೆ ಬೀರುವ ಮಹತ್ವದ ಪ್ರೇರಣೆಯಾಗಿ ತೀರ್ಥರೂಪರಾದ ಶ್ರೀ ಕೆ. ಗೋವಿಂದರಾಯ ಶೆಣೈ ಅವರು ಬದುಕಿಗೆ ನೀಡಿದರು. ಅವರು ಪ್ರಥಮ ಸ್ಫೂರ್ತಿಯ ಶಕ್ತಿ. ಇದರ ಜೊತೆಗೆ, ಮನೆಯಲ್ಲಿ ಎಂಟು ವರ್ಷಗಳ ಕಾಲ, ಪ್ರತಿವರ್ಷ ಗಣೇಶ ಚತುರ್ಥಿಯ ದಿನದಂದು ತಾಳಮದ್ದಲೆ ಎಂಬ ಶ್ರವಣಾತ್ಮಕ ಕಲಾ ಸಂಭ್ರಮವನ್ನು ನಡೆಸುವ ಪರಂಪರೆ ಸಹ ಅವರ ಮನಸ್ಸಿನಲ್ಲಿ ಯಕ್ಷಗಾನದ ಸುಗಂಧವನ್ನೆಬ್ಬಿಸಿದುದಾಗಿದೆ. ಈ ಎರಡು ಮಹತ್ವದ ಸಂಗತಿಗಳು ಅವರನ್ನು ಯಕ್ಷರಂಗದತ್ತ ಸೆಳೆಯಿತು.

ನಿರ್ವಹಿಸಿದ ವಿಶಿಷ್ಟ ಪಾತ್ರಗಳು:
ಶ್ರೀಯುತ ಆರ್ಗೋಡು ಮೋಹನದಾಸ್ ಶೆಣೈ ಅವರು ತಮ್ಮ ನಾಟಕೀಯ ಜೀವನದಲ್ಲಿ ಅನೇಕ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪಾತ್ರಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿರುವ ಶ್ರೇಷ್ಠ ಕಲಾವಿದರಾಗಿದ್ದಾರೆ. ಅವರು ಜೀವನಂತ್ಯವರೆಗೆ ಕಲಾಸೇವೆಗಿಂತಲೂ ಪಾತ್ರದ ಭಾವವನ್ನೇ ಪ್ರಮುಖವಾಗಿ ನಿರೂಪಿಸಿದವರು.
ಅವರ ತಪಸ್ಸಿನಂತಹ ಕಲಾಯಾತ್ರೆಯಲ್ಲಿ ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಪರಶುರಾಮ, ಬ್ರಹ್ಮ, ವಿಷ್ಣು, ರಾವಣ, ಶಂತನು, ದೇವವೃತ, ಉಘ್ರಸೇನಾ, ಅಕ್ರೂರ, ನಾರದ, ಭೀಮ, ಹರಿಶ್ಚಂದ್ರ, ವೀರಮಣಿ, ಜಮದಗ್ನಿ ಮುಂತಾದ ಅನೇಕ ಮಹತ್ವದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಬರೆದಿದ್ದಾರೆ.
ಇದೇ ಅಲ್ಲದೆ, ಅವರು ಅನೇಕ ಸಾಮಾಜಿಕ ಹಾಗೂ ಐತಿಹಾಸಿಕ ಪಾತ್ರಗಳಲ್ಲಿಯೂ ತಮ್ಮ ನಟನೆಗೆ ಜೀವ ತುಂಬಿ, ಯಕ್ಷಗಾನ ರಂಗದ ವಿಸ್ತಾರಕ್ಕೆ ತಮ್ಮದೇ ಆದ ವೈಶಿಷ್ಟ್ಯವನ್ನು ನೀಡಿರುವವರು.
- ಸೃಷ್ಟಿಸಿದ ಪ್ರಮುಖ ಕೃತಿಗಳು:
- ಯಕ್ಷಗಾನ ರಂಗದಲ್ಲಿ ತಮ್ಮ ನಟನೆ ಮೂಲಕಮನಸೆಳೆದ ಇವರು, ಬರವಣಿಗೆಯ ಮೂಲಕವೂ ಶ್ರೇಷ್ಠ ಕೊಡುಗೆ ನೀಡಿರುವ ಆರ್ಗೋಡು ಮೋಹನದಾಸ್ ಶೆಣೈ ಅವರು ಹಲವು ಕಲಾತ್ಮಕ ಹಾಗೂ ಭಾವಪೂರ್ಣ ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯಶಕ್ತಿಯಿಂದ ಜನ್ಮ ಪಡೆದ ಪ್ರಮುಖ ಪ್ರಸಂಗಗಳು:
- ಸ್ವಪ್ನ ಸಾಮ್ರಾಜ್ಯ
- ರಕ್ತತಿಲಕ
- ಮೃಗನಯನೆ
- ಯಶೋಧ-ಕೃಷ್ಣ
- ಪಾರ್ಥೀವಾಗೃಣಿ
- ಕರ್ಣಕಥಾಮೃತಂ
- ಈ ಕೃತಿಗಳು ಯಕ್ಷಗಾನದ ತಾಳಮದ್ದಲೆ ಹಾಗೂ ಪೂರ್ಣಪ್ರಸಂಗ ರೂಪದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿ ಪರಿಗಣಿಸಲ್ಪಟ್ಟಿವೆ.
- ಪದ್ಯ ರಚನೆ ಹಾಗೂ ಅರ್ಥಸಾಮರ್ಥ್ಯದ ವಿಶಿಷ್ಟ ಸೇವೆ:
- ಶ್ರೀಯುತ ಆರ್ಗೋಡು ಮೋಹನದಾಸ್ ಶೆಣೈ ಅವರು ಕೇವಲ ಅಭಿನಯ ಕ್ಷೇತ್ರದಲ್ಲಷ್ಟೇ ಅಲ್ಲದೆ, ಪದ್ಯರಚನೆ ಹಾಗೂ ಕಥಾವಸ್ತು ತಾತ್ಪರ್ಯ ನಿರೂಪಣೆಯಲ್ಲಿಯೂ ಅಪರೂಪದ ಸಾಮರ್ಥ್ಯವನ್ನು ಪ್ರದರ್ಶಿಸಿದ ಯಕ್ಷಗಾನ ಸೇವಾಕರ್ತರಾಗಿದ್ದಾರೆ. ಅವರ ಸಾಹಿತ್ಯದ ಮನೋಭಾವನೆಯಿಂದ ಉದಯವಾದ ಕೆಲವು ಪ್ರಮುಖ ಪದ್ಯಪ್ರಸಂಗಗಳು:
- ಬೆಳ್ಳಿ ನಕ್ಷತ್ರ
- ಶಿವಭೈರವಿ
- ವರ್ಣವೈಭವ
- ವಜ್ರ ಕಿರೀಟ
- ರಾಣಿಮೃಣಾಲಿನಿ
- ನಾಗನಯನೆ
- ಅಮರದೀಪ
- ಸೌಮ್ಯ ಸೌಂದರ್ಯ
- ಅವನಿ–ಅಂಬರ
- ಇವುಗಳು ಕಾವ್ಯಮಾತೃಕೆಯ ಶ್ರುತಿ–ಲಯ–ರಸವನ್ನು ಹೊಂದಿದ್ದು, ಪದ್ಯಪಾಠದ ಹೊಸ ಆಯಾಮವನ್ನು ರೂಪಿಸಿರುವ ನಿದರ್ಶನಗಳಾಗಿವೆ.
- ಇದಷ್ಟೇ ಅಲ್ಲದೆ, ಅವರು ಹಲವು ಪ್ರಸಿದ್ಧ ಯಕ್ಷಗಾನ ಪ್ರಸಂಗಗಳಿಗೆ ಪದ್ಯಗಳ ಅರ್ಥವನ್ನು ಶ್ರದ್ಧಾಪೂರ್ವಕವಾಗಿ ನಿರೂಪಿಸಿ ಕಲಾಸ್ವಾದನೆಯ ಬಾಗಿಲುಗಳನ್ನು ತೆರೆದಿದ್ದಾರೆ. ಅರ್ಥ ಬರೆಯಲಾದ ಪ್ರಮುಖ ಪ್ರಸಂಗಗಳು:
- ಲವಕುಶ ಕಾಳಗ
- ಶ್ರೀರಾಮಾಂಜನೇಯ
- ಕೃಷ್ಣಾರ್ಜುನ
- ಜಾಂಬವತೀ ಕಲ್ಯಾಣ
- ಸುಧನ್ವ ಕಾಳಗ
- ವೀರಮಣಿ
- ಮಹಿಷಮರ್ದಿನಿ
- ಮಧುರಾಮಹೀಂದ್ರ
- ಕರ್ಣಾರ್ಜುನ

“ಬಡಗುತಿಟ್ಟು ಯಕ್ಷಗಾನದಲ್ಲಿ ಶ್ರೀ ರಾಮನ ಪಾತ್ರ ಪ್ರಸಿದ್ಧ”
ಶ್ರೀರಾಮ ಎಂದರೆ ಪರಿಪೂರ್ಣ ವ್ಯಕ್ತಿತ್ವದ ಪ್ರತೀಕ. ಅವರು ಶಿಷ್ಟಾಚಾರದ, ಧರ್ಮದ, ಶಾಂತಿಯ ಹಾಗೂ ಶಕ್ತಿಯ ಸಮಸಮ ಪ್ರಮಾಣ. ಅವರ ವ್ಯಕ್ತಿತ್ವ ಎಷ್ಟು ಶ್ರೀಮಂತವೋ, ಅವರ ಪಾತ್ರವೂ ಅಷ್ಟೇ ಪರಿಪೂರ್ಣ. ಇಂತಹ ಪಾತ್ರವನ್ನು ನಟಿಸುವುದು ಕೇವಲ ಅಭ್ಯಾಸದಿಂದ ಸಾಧ್ಯವಲ್ಲ; ಅದು ಒಂದು ಅಂತರಂಗದ ಸಾಧನೆ.
ಶ್ರೀಯುತರು ಬಾಲ್ಯದಲ್ಲೇ ಮನೆ ಪಡಸಾಲೆಯಲ್ಲಿ ನಡೆದ ಭಾಗವತ ಪಾಠಗಳು, ರಾಮಾಯಣ–ಮಹಾಭಾರತಗಳ ಕಥಾ ಕಾಲಕ್ಷೇಪಗಳು, ಪುರಾಣ ಪುರುಷರ ಸ್ವರೂಪಗಳ ವಿವರಣೆಗಳು, ಈ ಕಥಾ ಪರಂಪರೆಗಳು ರಾಮನ ರೂಪ-ಗುಣಗಳನ್ನು ಅವರ ಮನಸ್ಸಿನಲ್ಲಿ ಅಳಿಯದಂತೆ ಬಿಂಬಿಸಿದವು.
ಆದರೆ ರಾಮನ ಪಾತ್ರದ ಸವಿವರ ಅಭಿನಯಕ್ಕೆ ಆಳವಾಗಿ ಪ್ರಭಾವಿತನಾದ ಕೃತಿ ಒಂದಿದ್ದರೆ, ಅದು ದೇರಾಜೆ ಸೀತಾರಾಮಯ್ಯರವರ ‘ಶ್ರೀರಾಮ ಚರಿತಾಮೃತಮ್’ ಎಂಬ ಅದ್ಭುತ ಕಾವ್ಯ. ಈ ಕೃತಿಯ ಶ್ರವಣ ಮತ್ತು ಅಧ್ಯಯನದಿಂದ, ಶ್ರೀರಾಮನ ವೇಷದಲ್ಲಿನ ಭಾವ, ಶಾಂತಿ, ಶಿಸ್ತು, ಶಕ್ತಿಯ ಒಳಅರ್ಥವನ್ನು ಹೃದಯಪೂರ್ವಕವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.
ರಾಮನ ಪಾತ್ರವೆಂದರೆ ಕೇವಲ ಧರ್ಮಪಾಲಕನೊಬ್ಬನ ಚಿತ್ರಣವಲ್ಲ; ಅದು ಮೌನದೊಳಗಿನ ಶಕ್ತಿಯ, ತಾಳ್ಮೆಯೊಳಗಿನ ತೀವ್ರತೆಯ ಪ್ರತೀಕ. ಆ ಪಾತ್ರವನ್ನು ಕಟ್ಟುವುದು ಅವರ ಜೀವನದ ಧ್ಯೇಯವಾಗಿತ್ತು.
ಯಕ್ಷಗಾನದಲ್ಲಿನ ದೀರ್ಘಕಾಲದ ಅನುಭವದ ಬೆಳಕಿನಲ್ಲಿ, ಪೌರಾಣಿಕ ಅಥವಾ ಸಾಮಾಜಿಕ ಪ್ರಸಂಗ?
ಅತ್ಯಂತ ಆತ್ಮೀಯವಾಗಿರುವುದು ಪುರಾಣ ಪ್ರಸಂಗಗಳು. ಸಾಮಾಜಿಕ ಪ್ರಸಂಗಗಳು ಸಹ ಆಕರ್ಷಕವಾಗಿರಬಹುದು, ಆದರೆ ಅವು ಬಹುತೇಕ ಮನರಂಜನೆಯ ಮಟ್ಟಕ್ಕೆ ಸೀಮಿತವಾಗಿರುವುದು. ಕೆಲವೊಂದು ಸಾಮಾಜಿಕ ಪ್ರಸಂಗಗಳು ಬದುಕಿಗೆ ಹಿತವಾದ ಮೌಲ್ಯಬೋಧನೆ ನೀಡುವ ಶಕ್ತಿಯುಳ್ಳವೆಯಾದರೂ, ಪುರಾಣ ಪ್ರಸಂಗಗಳು ಮಾತ್ರ ಮನರಂಜನೆಯ ಪಾಳಿಯಿಂದ ಬಹಳ ದೂರದಲ್ಲಿ ನಿಂತು, ಮಾನಸಿಕ ವಿಕಾಸಕ್ಕೂ, ಸಂಸ್ಕೃತಿಯ ಅರಿವಿಗೂ ಬಹುಮುಖ್ಯ ಪಾತ್ರ ವಹಿಸುತ್ತವೆ.
ಪುರಾಣ ಕಥೆಗಳು ನಮ್ಮ ಪರಂಪರೆ, ಧರ್ಮ, ನಂಬಿಕೆ, ಆಧ್ಯಾತ್ಮದ ಜೀವಾಳವನ್ನು ಮುಂದಿನ ತಲೆಮಾರಿಗೆ ಬೆಳೆಸಲು ಕಲ್ಲುಬದಿಯಂತೆ ಕಾರ್ಯನಿರ್ವಹಿಸುತ್ತವೆ. ಇಂತಹ ಕಥಾವಸ್ತುಗಳು ಕೇವಲ ರಂಗವೀಕ್ಷಣೆಯ ರಂಜನೆಯಲ್ಲದೆ, ಆತ್ಮಸಂಸ್ಕಾರ, ಧರ್ಮಚಿಂತನೆ ಮತ್ತು ಮೌಲ್ಯಪೂರ್ಣ ಬದುಕಿಗೆ ದಾರಿ ತೋರುವ ದೀಪವಾಗಿದೆ. ಈ ಕಾರಣದಿಂದಲೇ ಸದಾ ಪುರಾಣ ಪ್ರಸಂಗಗಳನ್ನೇ ಹೆಚ್ಚು ಮೆಚ್ಚುತ್ತೇನೆ, ಇಚ್ಛಿಸುತ್ತೇನೆ.
“ಸಾಮಾಜಿಕ ಪ್ರಸಂಗಗಳಲ್ಲಿ ಆಧುನಿಕ ಸಂವೇದನೆಯ ಪಾತ್ರಗಳು ಬಂದಾಗ ಹೇಗೆ ನಿಭಾಯಿಸಬಹುದು?”
ಯಕ್ಷರಂಗ ಎಂಬುದು ಕೇವಲ ರಂಗಸ್ಥಳವಲ್ಲ, ಅದು ಅನ್ನದಾತನೂ ಹೌದು. ಇಂತಹ ಪವಿತ್ರ ವೇದಿಕೆಗೆ ಸಲ್ಲಿಸಬೇಕಾದ ಕೃತಜ್ಞತೆ ಎಂದರೆ, ಪ್ರತಿಯೊಂದು ಪಾತ್ರವನ್ನೂ ಸಂಪೂರ್ಣ ಶ್ರದ್ಧೆಯಿಂದ, ಪ್ರೇಕ್ಷಕರ ಭಾವನೆಗಳನ್ನು ಗೌರವಿಸುತ್ತಾ ನಿರ್ವಹಿಸುವುದು.
ಆಧುನಿಕ ಸಂವೇದನೆಯ ಪಾತ್ರಗಳು ಹೆಚ್ಚು ಸೂಕ್ಷ್ಮತೆಯಿಂದ ಕೂಡಿರುತ್ತವೆ. ಇಂಥ ಸಂದರ್ಭಗಳಲ್ಲಿ, ಯಾವುದೇ ಪಾತ್ರವನ್ನು ಪ್ರದರ್ಶನ ಮಾಡುವಾಗ ಅದರ ಗಂಭೀರತೆಯೊಂದಿಗೆ ಆಟವಾಡದೇ, ಕಲೆಯ ಮೌಲ್ಯ, ಪಾತ್ರದ ಸಾರ, ಮತ್ತು ಅದರ ಪರಿಣಾಮಕಾರಿತ್ವವನ್ನು ಕಾಪಾಡುವ ಜವಾಬ್ದಾರಿಯಿದೆ. ಪ್ರೇಕ್ಷಕರಿಗೆ ನಿರಾಸೆಯ ಮಬ್ಬು ಬೀರುವಂತೆಯೇನೂ ಆಗಬಾರದು. ಕಲಾವಿದನಾಗಿ ಕರ್ತವ್ಯ ಎಂದರೆ ಪ್ರತಿ ಪಾತ್ರಕ್ಕೂ ಜೀವ ತುಂಬಿ, ಯಥಾಸಾಧ್ಯವಾಗಿ ಸತ್ಯನಿಷ್ಠೆಯೊಂದಿಗೆ ಅದು ಬಿಂಬಿಸಬೇಕೆಂಬ ನಿಷ್ಠೆಯು.
ಯಕ್ಷಗಾನ ಪ್ರಸಂಗ ರಚನೆ ಹಾಗೂ ತಾಳಮದ್ದಲೆ ಕ್ಷೇತ್ರದ ಅನುಭವ
ಪೌರಾಣಿಕ ಪ್ರಸಂಗಗಳ ಅಧ್ಯಯನ, ಅದರಲ್ಲಿ ಬರುವ ಪದ್ಯಗಳ ತಾಳ, ಮಟ್ಟು ಹಾಗೂ ರಾಗಗಳ ಕುರಿತು ಹೊಂದಿದ್ದ ಅಭ್ಯಾಸ ಮತ್ತು ತಿಳುವಳಿಕೆ ಒಂದು ಪ್ರಶ್ನೆಯಂತೆ ಮೂಡಿತು—”ನಾನ್ಯಾಕೆ ಪ್ರಸಂಗ ರಚನೆ ಮಾಡಬಾರದು?” ಎಂಬ ಆತ್ಮಪೃಚ್ಛೆ. ಇದೇ ಚಿಂತನೆ ಯಕ್ಷಗಾನ ಪ್ರಸಂಗ ರಚನೆಯ ದಿಕ್ಕಿಗೆ ಸೆಳೆದಿತು.
ಒಮ್ಮೆ ಮುಂಬೈಯಲ್ಲಿ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಸ್ನೇಹಿತನ ಮನೆಯಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಶೇಖರ’ ಎಂಬ ಅತ್ಯಂತ ಹಳೆಯ ಹಾಗೂ ಭಾವಪೂರ್ಣ ಚಲನಚಿತ್ರವನ್ನು ನೋಡುವ ಅವಕಾಶವಾಯಿತು. ಆ ಚಿತ್ರ ಭಾವನೆ ಹಾಗೂ ಕಲ್ಪನೆಯ ಬೆಳಕು ನೀಡಿತು. ಅದರಿಂದ ಪ್ರೇರಿತನಾಗಿ ‘ಸ್ವಪ್ನ ಸಾಮ್ರಾಜ್ಯ’ ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗವನ್ನು ರಚಿಸಿದೆ. ಈ ಪ್ರಸಂಗವನ್ನು ಶ್ರೀ ಪೆರ್ಡೂರು ಮೇಳದಲ್ಲಿ ಮಂಡನೆಯಾಗಿಸಿ, ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಹಾಗೂ ಅಭಿನಂದನೆ ಗಳಿಸಿತು.
ಈ ಯಶಸ್ಸಿನ ನಂತರ ನನ್ನಿಂದ ನಿರ್ಮಿತವಾದ ಇನ್ನಷ್ಟು ಪ್ರಸಂಗಗಳು:
ರಕ್ತತಿಲಕ (ಸಾಮಾಜಿಕ)
ಮೃಗನಯನೆ (ಸಾಮಾಜಿಕ)
ಯಶೋದಾ-ಕೃಷ್ಣ (ಪೌರಾಣಿಕ)
ಕರ್ಣಕಥಾಮೃತಮ್ (ಪೌರಾಣಿಕ)
ಬೆಳ್ಳಿ ನಕ್ಷತ್ರ (ಪದ್ಯ ರಚನೆ)
ಈ ಎಲ್ಲ ಕೃತಿಗಳು ಕಲಾಸಾಹಿತ್ಯದ ಪ್ರಾಮಾಣಿಕತೆಗೆ ಗೌರವವನ್ನೆರಗಿದ ನಾಟಕೀಕರಣಗಳಾಗಿವೆ.
ಅದರೊಂದಿಗೆ, ಹೃದಯಕ್ಕೆ ಹತ್ತಿರವಾದ ಮತ್ತೊಂದು ಕ್ಷೇತ್ರವೆಂದರೆ ತಾಳಮದ್ದಲೆ. ಇದರ ಬಗ್ಗೆ ನನ್ನ ಆದ್ಯತೆ ಮತ್ತು ಆಸಕ್ತಿ ನನಗೆ ಪೋಷಣೆಯಾಗಿ ಬಂದಿದೆ. ಅದಕ್ಕೆ ಕಾರಣ ನಮ್ಮ ಮನೆಯ ಚೌತಿಯ ಗಣಪತಿ. ಕಳೆದ 157 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದ ತಾಳಮದ್ದಲೆ ಪರಂಪರೆ ನಮ್ಮ ಮನೆಯಲ್ಲಿದೆ. ಈ ತಾಳಮದ್ದಲೆ ಕೂಟಗಳಲ್ಲಿ ಭಾಗವಹಿಸಿದ್ದ ಹಿರಿಯ ವಿದ್ವಾಂಸರು, ಭಾಗವತರ ಸಹವಾಸ, ಅರ್ಥಧಾರಿಗಳ ನಿರ್ವಹಣಾ ತಳಮಟ್ಟ, ಇವೆಲ್ಲವೂ ಕಲಾವಿದನಾಗಿ ರೂಪಿಸುವಲ್ಲಿ ಅಪಾರ ಪ್ರಭಾವ ಬೀರಿವೆ.

ಚೌಕಿ ಮನೆಯ ಕಲಾ ಅನುಭವ ಹಾಗೂ ಗುರುತ್ವದ ಭಾವನೆ
“ಗುರು” ಎಂಬ ಪದವನ್ನು ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಮಾತ್ರವಲ್ಲ, ಜೀವನಾನುಭವದಿಂದ ಕೂಡಿದ, ಆಳವಾದ ಸಂಬಂಧವನ್ನು ಸೂಚಿಸುವ ಪದವೆಂದು ನಾನು ನಂಬುತ್ತೇನೆ. ನಾನು “ಗುರು” ಎಂದು ನಾನೇ ನಾನಗೆನ್ನಿಕೊಳ್ಳುವುದಿಲ್ಲ—ಆ ಸ್ಥಾನಕ್ಕೆ ಭಕ್ತಿಯಿಂದ ನನ್ನನ್ನು ಒಪ್ಪಿಕೊಂಡ, ಕಲಿಯುವ ಶ್ರದ್ಧೆಯುಳ್ಳ ಶಿಷ್ಯರೇ ನನಗೆ ಆ ಬಿರುದನ್ನು ಕೊಟ್ಟವರು.
ಕಲಿಯುವ ಇಚ್ಛೆ ಇರುವವರಲ್ಲಿ ನನ್ನ ವಿದ್ಯೆಯನ್ನು ನಾನು ಧಾರೆ ಎರೆದಿದ್ದೇನೆ. ಅವರಲ್ಲಿ ಶ್ರದ್ಧೆ ಇದ್ದುದನ್ನು ಕಂಡಾಗ, ನಾನು ರಾತ್ರಿ ನಿದ್ದೆಯಲ್ಲಿದ್ದಾಗ ಅವರು ನನ್ನ ಬಳಿ ಬಂದು, “ಈ ಪದ್ಯದ ಅರ್ಥ ಹೇಗೆ ಹೇಳಬೇಕು?” ಎಂದು ಕೇಳಿದರೂ ಸಹ, ಪ್ರೀತಿಯಿಂದ, ಶಾಂತಿಯಿಂದ ಕಲಿಸಿ ಕೊಟ್ಟಿರುವುದೆಂದು ಹೆಮ್ಮೆಪಡುವೆನು. ನಾನು ಕಲಿತದ್ದೆಲ್ಲ, ಅನುಭವಿಸಿದದ್ದೆಲ್ಲ, ಹಂಚಿಕೊಳ್ಳದೆ ಉಳಿಸುವ ಮನೋಭಾವ ನನಗಿಲ್ಲ. ಕಲಾವಿದನು ತಾನೂ ಬೆಳೆದು, ಇನ್ನೊಬ್ಬರನ್ನು ಬೆಳೆಸುವ ವೃತ್ತಿಯನ್ನು ಹೊಂದಿದಾಗಲೇ ಆ ಕಲೆಯ ಸತ್ವ ಪೂರ್ತಿಯಾಗುತ್ತದೆ ಎಂಬುದು ನನ್ನ ಗಟ್ಟಿ ನಂಬಿಕೆ.
ಅದರೊಂದಿಗೆ, ನಾನು ಮತ್ತೊಂದು ಬಹುಮುಖ್ಯವಾದ ತತ್ತ್ವವನ್ನೂ ನಂಬುತ್ತೇನೆ ರಂಗಸ್ಥಳದಲ್ಲಿ ಕಿರಿಯ ಕಲಾವಿದನ ಮುಂದೆ ಹಿರಿಯನು ಪಾಂಡಿತ್ಯ ಪ್ರದರ್ಶನ ಮಾಡಬಾರದು. ಯಾಕೆಂದರೆ ಕಲೆಯನ್ನು ಶೋಷಣೆಯಾಗಿ ಮಾಡುವುದಲ್ಲ, ತೋರಿಕೆಯಾಗಿ ಬಿಂಬಿಸುವುದೂ ಅಲ್ಲ—ಅದು ಹೃದಯದ ದಾನವಾಗಿರಬೇಕು. ಕೆಲವೊಮ್ಮೆ “ಪತಾಕೆ ಎಂದರೇನು?” ” ಧ್ವಜ ಎಂದರೇನು?” ಎಂಬಂತೆ ತಾಂತ್ರಿಕ ವಿಷಯಗಳಲ್ಲಿ ಕಿರಿಯರನ್ನು ಪ್ರಶ್ನೆಗಳಿಂದ ಅಲೆಮಾರಿ ಮಾಡುವ ದೃಶ್ಯಗಳು ನೋಡುಗರ ಮುಂದೆ ಅಸಹಜವಾಗಿ ಕಾಣಿಸುತ್ತವೆ.
ಇನ್ನೊಂದು ವಿಷಾದಕರ ಬೆಳವಣಿಗೆ ಎಂದರೆ, ಇತ್ತೀಚೆಗೆ ಯಕ್ಷಗಾನ ವೇದಿಕೆಯಲ್ಲಿ ಕೆಲವು ಕಲಾವಿದರಿಂದ ಅಪಪ್ರಸ್ತುತವಾದ ಅರ್ಥಗಳು, ಲೌಕಿಕತೆ ಮಿಕ್ಕಿ ಹೋಗಿರುವ ಮಾತುಗಳು, ರಾಜಕೀಯ ಹೇಳಿಕೆಗಳು ಮುಂತಾದವುಗಳು ನಿರ್ಬಂಧವಿಲ್ಲದೇ ಹರಿದಾಡುತ್ತಿರುವುದು. ಇದು ಯಕ್ಷಗಾನದ ಪಾವಿತ್ರ್ಯ ಮತ್ತು ಸಂಸ್ಕೃತಿಯ ಸ್ಫೂರ್ತಿಗೆ ಧಕ್ಕೆ ತರುತ್ತದೆ. ಕಲೆಯು ಶುದ್ಧವಾದ ಆತ್ಮತತ್ತ್ವವನ್ನು ಹೊತ್ತಿರುವ ಪಥವಾಗಿದೆ. ಅದನ್ನು ಕೇವಲ “ಮನರಂಜನೆಯ ಹಸಿವಿಗೆ” ಉಪಯೋಗಿಸಬಾರದು ಎನ್ನುವ ತಾತ್ವಿಕ ನಿಲುವಿನಲ್ಲಿ ನಾನು ಸದಾ ನಿಂತಿದ್ದೇನೆ.
ಕಲಾವಿದನು ಯಶಸ್ವಿಯಾಗಬೇಕಾದರೆ ಪದ್ಯಪಾಠವೂ ಬೇಕು, ಹಿಮ್ಮೇಳದ ಸಹಕಾರವೂ ಅಗತ್ಯ
ಯಕ್ಷಗಾನವೇ ಒಂದು ಸಂಯುಕ್ತ ಕಲೆಯಾಗಿದೆ. ಇಲ್ಲಿ ಪಾತ್ರವನ್ನು ನಿರ್ವಹಿಸುತ್ತಿರುವ ಕಲಾವಿದನಿಗೆ ಪ್ರಸಂಗದ ಪದ್ಯಗಳು ಸಂಪೂರ್ಣವಾಗಿ ಕಂಠಪಾಠ ಆಗಿರುವುದು ಅತ್ಯಂತ ಅವಶ್ಯಕ. ಏಕೆಂದರೆ ಪದ್ಯವು ಪಾತ್ರದ ಹೃದಯವಾಗಿದೆ. ಪದ್ಯ ಕಂಠಪಾಠವಿದ್ದಾಗಲೇ ಅವನು ನಿರರ್ಗಳವಾಗಿ ಅರ್ಥವನ್ನು ಹೇಳುವ ಧೈರ್ಯ, ನಿರ್ವಹಣಾ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಪದ್ಯದ ಶಬ್ದ, ಲಯ, ಭಾವ ಇಲ್ಲದಿದ್ದರೆ, ಕಥೆಯ ಧಾರೆ ಮುರಿಯಬಹುದು, ಪಾತ್ರದ ಭಾವನೆ ತುಡಿತವಾಗಬಹುದು.
ಅದಷ್ಟೇ ಅಲ್ಲ, ಕಲಾವಿದನಿಗೆ ಸ್ಫೂರ್ತಿಯ ಮೂರ್ತಿಯಂತೆ ಇದ್ದು, ಅವನನ್ನು ಬೆಳೆಸುವವರು ಹಿಮ್ಮೇಳದ ಕಲಾವಿದರು—ಭಾಗವತ, ತಾಳ, ಮದ್ದಳೆ, ಚಂಡೆ. ಅವರೊಂದಿಗೆ ಇರುವ ಸಾಮರಸ್ಯ, ಸಹಕಾರ, ಶಿಸ್ತಿನ ಸೌಹಾರ್ದತೆ ಕೂಡ ಕಲಾವಿದನ ಸೌಂದರ್ಯಪೂರ್ಣ ಅಭಿನಯಕ್ಕೆ ಬಹುಮೂಲ್ಯ. ಭಾಗವತನ ಸಮಯಪ್ರಜ್ಞೆ, ಮದ್ದಳೆಗಾರನ ತೀವ್ರತೆ, ಚಂಡೆಗಾರನ ಗಂಭೀರತೆ ಇವೆಲ್ಲ ಪಾತ್ರದ ಆಳವನ್ನೂ ಗಾಢವನ್ನೂ ತರುತ್ತವೆ.
ಭಾಗವತರು ನಾಟ್ಯಮಟ್ಟವಷ್ಟೇ ಅಲ್ಲದೆ, ಕೆಲವೊಮ್ಮೆ ರಂಗದ ಶಿಸ್ತನ್ನೂ ಕಲಿಸಬೇಕಾದವರು. ಪದ್ಯದ ಎತ್ತುಗಡೆ, ಮದ್ದು, ಪ್ರಯಾಣ ಕುಣಿತ, ತೆರೆಕುಣಿತ, ಒಡ್ಡೋಲಗ ಮುಂತಾದ ಅಂಶಗಳನ್ನು ಕಲಾವಿದನಿಗೆ ತೋರಿಸುವ, ಅರ್ಥವತ್ತಾದ ಹಾದಿ ತೋರಿಸುವ ನೈತಿಕ ಜವಾಬ್ದಾರಿ ಅವರ ಮೇಲಿದೆ.
ಈ ಎಲ್ಲಾ ಅಂಶಗಳು ಕಲಾವಿದನ ಪಾತ್ರ ನಿರ್ವಹಣೆಗೆ ಮೂಲ ಆಧಾರಗಳು. ಅವನ ಅಭಿನಯ ಇನ್ನಷ್ಟು ಅಚ್ಚುಕಟ್ಟಾಗಿ, ಸಂಯಮದಿಂದ, ಚಂದವಾಗಿ ಮೂಡಿಬರಬೇಕೆಂದರೆ ಪದ್ಯಪಾಠ ಮತ್ತು ಹಿಮ್ಮೇಳದ ಪ್ರಾಮಾಣಿಕ ಸಹಕಾರ ಅವಶ್ಯಕ. ಇದು ಯಕ್ಷಗಾನದ ಜೀವಾಳ.

ಸನ್ಮಾನಗಳು ಹಾಗೂ ಗೌರವಪೂರ್ಣ ಪ್ರಶಸ್ತಿಗಳು:
ಯಕ್ಷಗಾನ ಸೇವೆಯಲ್ಲಿ ಸಲ್ಲಿಸಿದ ನಿರಂತರ ತಪಸ್ಸು ಹಾಗೂ ಕಲಾಪ್ರತಿಭೆಗೆ ಪರಿಗಣನೆಯಾಗಿ, ಶ್ರೀಯುತ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ರಾಜ್ಯಮಟ್ಟದಿಂದ ಸ್ಥಳೀಯ ಮಟ್ಟದವರೆಗೆ ಅನೇಕ ಗೌರವ ಹಾಗೂ ಸನ್ಮಾನಗಳು ಲಭಿಸಿದ್ದವು. ಅವರಿಗೆ ಲಭಿಸಿರುವ ಪ್ರಮುಖ ಪ್ರಶಸ್ತಿಗಳೆಂದರೆ:
♦ ಎಸ್. ನಿಡಂಬೂರು ಪ್ರಶಸ್ತಿ
♦ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
♦ ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ
♦ ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ
♦ ಬೈಕಾಡ್ತಿ ಪ್ರಶಸ್ತಿ
♦ ದ್ರೋಣಾಚಾರ್ಯ ಪ್ರಶಸ್ತಿ
♦ ಜಿ.ಎಸ್.ಬಿ. ಕಲಾರತ್ನ ಪ್ರಶಸ್ತಿ
♦ 2024ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಇವುಗಳ ಜೊತೆಗೆ, ರಾಜ್ಯಾದ್ಯಂತ ಮತ್ತು ಬೇರೆ ಬೇರೆ ಕಲಾ ವೇದಿಕೆಗಳಲ್ಲಿ ಸಾವಿರಕ್ಕೂ ಹೆಚ್ಚು ಸನ್ಮಾನಗಳು ಅವರಿಗೆ ಲಭಿಸಿದ್ದು, ಕಲಾಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಗೆ ಶ್ರದ್ಧಾಸಪದವಾದ ಮಾನ್ಯತೆಯಾಗಿದೆ.

ಯಕ್ಷಗಾನ ಕ್ಷೇತ್ರದ ಪಾಲಿಗೆ ನನ್ನ ಕೃತಜ್ಞ ಹೃದಯದ ನುಡಿ:
ಯಕ್ಷಗಾನ ಎಂಬ ಕಲಾಕ್ಷೇತ್ರಕ್ಕೆ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ಅಚಲ ಆತ್ಮತೃಪ್ತಿ ನನಗೆ ಸದಾ ಸಾಥಿಯಾಗಿದೆ. ಈ ಪವಿತ್ರ ವೇದಿಕೆ ನನಗೆ ಕೇವಲ ಅನುಭವವನ್ನೇ ಅಲ್ಲ, ಅನೇಕರ ಆತ್ಮೀಯತೆಯನ್ನೂ, ಸಂಬಂಧಗಳ ಸಹವಾಸವನ್ನೂ ನೀಡಿದೆ ಎಂಬ ಗಾಢ ಕೃತಜ್ಞತೆಯ ಭಾವನೆ ನನ್ನ ಮನದಾಳದಲ್ಲಿ ಬೆಳೆದಿದೆ.”ಆರ್ಗೋಡು” ಎಂಬ ಹೆಸರಿಗೆ ಯಕ್ಷಗಾನವೇ ಅಚ್ಚೊತ್ತಿದ ಶ್ರೇಷ್ಠ ಖ್ಯಾತಿ ನೀಡಿದ್ದು ಈ ಕಲೆ ಎಂಬುದು ನನಗೆ ಅಷ್ಟೇ ಗರ್ವವಿನ ವಿಷಯವೂ ಹೌದು. ಈ ಕ್ಷೇತ್ರದ ಕೊಡುಗೆ ನನ್ನ ಜೀವನದ ಅಮೂಲ್ಯ ಸಂಪತ್ತು.
ಇದನ್ನು ಗಮನಿಸಿ ಒಪ್ಪಲೇಬೇಕಾದ ನಿಜವೆಂದರೆ ಪೂರ್ವತಯಾರಿ ಇಲ್ಲದೆಯೇ, ಶುದ್ಧವಾಗಿ, ನಿರರ್ಗಳವಾಗಿ, ಸಂಸ್ಕೃತಿಯ ನಯತೆ ಇಟ್ಟುಕೊಂಡು, ಕನ್ನಡದಲ್ಲಿ ಅಹೋರಾತ್ರಿ ಮಾತನಾಡಬಲ್ಲವನು ಯಕ್ಷಗಾನ ಕಲಾವಿದನಲ್ಲದೆ ಬೇರೆ ಯಾರು ಇರಲಾರರು. ಇಂತಹ ಭಾಷಾ ಪಾಕ್ವತೆ, ಕಲಾ ಸಂವೇದನೆ ಮತ್ತು ಆತ್ಮೀಯ ನಿರೂಪಣೆ ಯಕ್ಷಗಾನ ಕಲಾವಿದನಲ್ಲಿ ಮಾತ್ರ ಕಾಣಬಹುದಾದ ಅಂಶ.ಒಬ್ಬ ಪ್ರೇಕ್ಷಕನ ಸರ್ವಾಂಗೀಣ ಮನೋರಂಜನೆಗೆ ಗಾಯನ, ನೃತ್ಯ, ಭಾಷಣ, ಅಭಿನಯ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷವಾಗುವ ಕಲೆಯ ಹೆಸರು ಯಕ್ಷಗಾನ. ಇಂತಹ ಕಲೆ ಪ್ರಪಂಚದ ಇತರ ಯಾವ ನಾಟ್ಯ ರೂಪಗಳಲ್ಲಿ ಕೂಡ ಕಾಣಿಸಲಾಗದು ಎಂಬುದು ನಮ್ಮ ಹೆಮ್ಮೆ ಹಾಗೂ ಅದೃಷ್ಟದ ಸಂಗತಿ.
ಇವರು ನಂಬಿರುವ ಕಲಾಮಾತೆ ಹಾಗೂ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು, ಇವರಿಗೆ ಕಲಾಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿ, ಸದ್ಬುದ್ಧಿ ಹಾಗೂ ಸೃಜನಶೀಲತೆ ಕರುಣಿಸಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ಅವರ ಕಲಾಯಾತ್ರೆ ಬೆಳಗಲಿ, ಯಶಸ್ವಿಯಾಗಲಿ ಎಂಬುದು ಎಲ್ಲ ಕಲಾಸಕ್ತರ ಹಾರೈಕೆ. ಕಲಾಮಾತೆ ಅವರ ಬದುಕಿಗೆ ಸಕಲ ಮಂಗಳಗಳು, ಆಯುರಾರೋಗ್ಯ, ಶ್ರೀ, ಧೃತಿ, ಕೀರ್ತಿ ಹಾಗೂ ಕಲಾ ಪುಣ್ಯವನ್ನು ಪರಿಪೂರ್ಣವಾಗಿ ನೀಡಲಿ ಎಂಬುದೇ ನಮ್ಮ ಸದಾಶಯ
ನಮ್ಮ ಸೋಶಿಯಲ್ ಮೀಡಿಯಾ ಚಾನಲನ್ನು ಸೇರಲು ಈ ಎಲ್ಲಿ ಕ್ಲಿಕ್ ಮಾಡಿ:




9 thoughts on “ಯಕ್ಷ ಚರಿತ್ರೆ-3”
pk665game, here I come! Let’s see if I can finally win something. I’m ready for some wins! Check it out here: pk665game.
Alright, trying my luck with p444betgame! Hope it has better odds than my last try! Wish me luck! Check them out: p444betgame
K99onlinegame time! Excited to see what this is all about. Hopefully some good times and maybe even a win. Check it out here: k99onlinegame
Spin PH 8! Baka dito ang jackpot ko! Anyone else trying their luck sa spin ph 8?
Easy login is a must for me. If m777casinologin delivers on that, I’m in! Gonna give it a shot. Here’s the link: m777casinologin
Downloading ninecasinoapk seems like a good idea for mobile gaming. Hope it doesn’t drain my battery too much! Get it here: ninecasinoapk
Been playing on SCV388 for a while now. It’s my go-to when I want to relax and try my luck. Good selection of games and payouts seem fair. Check it out! scv388
CW777game offers a great gaming experience. The site layout is smooth, making it easy to jump from game to game. Plenty to keep you entertained. cw777game
Alright, mxwowcasino… not gonna lie, the name caught my eye. The welcome bonus is something, really good. Plenty of slots and live games to keep you busy. It feels pretty legit so far. If you’re hunting for a new casino spot, go to mxwowcasino!